ಗಲ್ಲಾ ಅರುಣಾ ಕುಮಾರಿ (ಜನನ ೧ ಆಗಸ್ಟ್ ೧೯೪೪) ಒಬ್ಬ ಭಾರತೀಯ ರಾಜಕಾರಣಿ. ಅವರು ಸಂಸದ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದ ಪಟೂರಿ ರಾಜಗೋಪಾಲ ನಾಯ್ಡು ಅವರ ಪುತ್ರಿ. ಅವರು ಪ್ರಸ್ತುತ ತೆಲುಗು ದೇಶಂ ಪಕ್ಷದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಅವರು ಆಂಧ್ರಪ್ರದೇಶ ಸರ್ಕಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದರು ಮತ್ತು ಚಂದ್ರಗಿರಿ ಕ್ಷೇತ್ರದ ಶಾಸಕರಾಗಿದ್ದರು . ೮ ಮಾರ್ಚ್ ೨೦೧೪ ರಂದು ಅವರು ತೆಲುಗು ದೇಶಂ ಪಕ್ಷಕ್ಕೆ ಸೇರಿದರು. ಅರುಣಾ ಕುಮಾರಿ ಅವರು ಕೈಗಾರಿಕೋದ್ಯಮಿ ಮತ್ತು ಅಮರ ರಾಜ ಗ್ರೂಪ್ ಆಫ್ ಕಂಪನೀಸ್ ನ ಸಂಸ್ಥಾಪಕ ಗಲ್ಲಾ ರಾಮಚಂದ್ರ ನಾಯ್ಡು ಅವರನ್ನು ವಿವಾಹವಾಗಿದ್ದಾರೆ. ಅವರು ಲೇಕ್ ವ್ಯೂ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಅವರು ಕ್ರಿಸ್ಲರ್ ಕಾರ್ಪೊರೇಷನ್‌ಗಾಗಿ ಗಣಕ ತಂತ್ರಜ್ಙರಾಗಿ ಮತ್ತು ಮಾರಾಟ ವಿಭಾಗದಲ್ಲಿ ಮಾಹಿತಿ ನಿರ್ವಿವಹಣಾ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದರು. ಅವರ ರಾಜಕೀಯ ಜೀವನದಲ್ಲಿ ಮುಖ್ಯ ಪಾತ್ರಗಳಲ್ಲಿ ಆಂಧ್ರ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದು ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದು ಸೇರಿವೆ. ಅವರು ೧೯೮೯ರಿಂದ ೧೯೯೪, ೧೯೯೯ರಿಂದ ೨೦೧೪ ರವರೆಗೆ ಚಂದ್ರಗಿರಿ ಕ್ಷೇತ್ರದ ಶಾಸಕರಾಗಿದ್ದರು ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ದಿವಂಗತ ವೈ.ಎಸ್. ರಾಜಶೇಖರ ರೆಡ್ಡಿ ಅವರ ಮೊದಲ ಅವಧಿಯಲ್ಲಿ ಆರೋಗ್ಯ ಶಿಕ್ಷಣ ಮತ್ತು ವಿಮಾ ಸಚಿವೆ ಆಗಿದ್ದರು, ಆ ಅವಧಿಯಲ್ಲಿ ಅವರು ಸಾರ್ವತ್ರಿಕ ಆರೋಗ್ಯ ಕ್ಷೇತ್ರವನ್ನು ರಚಿಸುವ ಉದ್ದೇಶದಿಂದ ಆರೋಗ್ಯಶ್ರೀ ಎಂಬ ಯೋಜನೆಯನ್ನು ಜಾರಿಗೆ ತಂದರು. ಅವರು ಕೆಲವು ಕಾಲ ಕಾಂಗ್ರೆಸ್ ಸರ್ಕಾರದ ಎರಡನೇ ಅವಧಿಯಲ್ಲಿ ರಸ್ತೆ ಮತ್ತು ಕಟ್ಟಡಗಳ ಸಚಿವರಾಗಿದ್ದರು. ಅರುಣಾ ಕುಮಾರಿ ತೆಲುಗಿನಲ್ಲಿ ಹಲವಾರು ಕಾದಂಬರಿಗಳನ್ನು ರಚಿಸಿದ್ದಾರೆ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==